ಪ್ರಾಣ ಬಿಟ್ಟೇವು-ಐದಳ್ಳ ರೈತರ ಭೂಮಿ ಬಿಡಲ್ಲ- ರೈತ ಸಂಘ ಎಚ್ಚರಿಕೆ

0
37
ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿ ಐದಳ್ಳ ಕಾವಲಿನ ಸರ್ವೆ ನಂ ೧ ರ ೨೬೮೦ ಎಕ್ಕರೆ ಭೂಮಿಯಲ್ಲಿ ಕೃಷಿ ಚಟವಟಿಕೆ ನಡೆಸುವ ರೈತರನ್ನು ಅರಣ್ಯ ಇಲಾಖೆ ಒಕ್ಕಲ್ಲೆಬ್ಬಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ. ಸಂಬಂಧ ಪಟ್ಟವರು ರೈತರಿಗೆ ಭೂಮಿ ಉಳಿಸಿಕೊಡಬೇಕು ಇಲ್ಲವಾದರೆ ಜನವರಿ ೨೬ ರಂದು ಬೇಲೂರಿಗೆ ರಸ್ತೆತಡೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನಕುಮಾರ್ ನೇತೃತ್ವದಲ್ಲಿ ನೂರಾರು ರೈತರು ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ, ಕರಗುಂದ,ಗೇರುಮರ, ಗಂಗೂರು, ಹಳೇಬೀಡು ಮೂಲಕ ಬೇಲೂರಿಗೆ ಹಾದು ಹೋಗುತ್ತಿದ್ದ ಪ್ರತಿಭಟನಕಾರನ್ನು ಮಾರ್ಗಮದ್ಯೆ ಹೆಬ್ಬಾಳು ಬಳಿ ಕ್ಷಣಕಾಲ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಮಮತ ಅವರಿಗೆ ಮನವಿ ಸಲ್ಲಿಸಿ, ಪ್ರತಿಭಟನೆಯನ್ನು ವಾಪಸ್ಸು ಪಡೆದರು. ಬೇಲೂರು ಪಿಎಸ್ ಐ ಶಿವಾನಂದ ಪಾಟೀಲ್ ತಂಡ ಭದ್ರತೆ ನೀಡಿದರು.
          ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನಕುಮಾರ್, ಐದಳ್ಳ ಕಾವಲು ಕೃಷಿಕರ ಭೂಮಿ, ಅರಣ್ಯ ಇಲಾಖೆ ಏಕಾಏಕಿ ನಮ್ಮ ಭೂಮಿ ಎಂದು ಬಡಕೃಷಿಕರನ್ನು ಒಕ್ಕಲ್ಲೆಬ್ಬಿಸುವ ಹುನ್ನಾರ ಮಾಡುತ್ತಿರವ ಕಾರಣದಿಂದ ನಾವುಗಳು ರಾಷ್ಟçಪತಿ,ರಾಜ್ಯಪಾಲರಿಗೆ ಮನವಿ ನೀಡಲಾಗಿದೆ. ಇದೇ ಭೂಮಿಗಾಗಿ ನೂರಾರು ರೈತರು ಬೇಲೂರಿಗೆ ಸತತ ಮೂರು ಭಾರಿ ಪಾದಯಾತ್ರೆ ನಡೆಸಲಾಗಿದೆ. ನಮ್ಮ ಹೋರಾಟಕ್ಕೆ ಪ್ರೋ.ನಂಜುಂಡಸ್ವಾಮಿರವರೇ ಶಕ್ತಿ, ಆದರೆ ಕೆಲವರು ಹಣ ಪಡೆದು ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ. ಜನವರಿ ೨೬ ರಂದು ಬೇಲೂರಿನಲ್ಲಿ ರಸ್ತೆತಡೆದು ಪ್ರತಿಭಟನೆ ಉದ್ದೇಶದಿಂದಲೇ ನಾವುಗಳು ಜನವರಿ ೨೪ ರಿಂದ ಅರಸೀಕೆರೆ ತಾಲ್ಲೂಕಿನಿಂದ ಬೇಲೂರಿಗೆ ಪಾದಯಾತ್ರೆ ನಡೆಸಿದ್ದು, ಜ.೨೬ ಗಣರಾಜ್ಯೋತ್ಸವ ದಿನ ಪ್ರತಿಭಟನೆ ನಡೆಸುವುದು ಉಚಿತವಲ್ಲ ಎಂದು ನಾವುಗಳು ಮಾರ್ಗ ಮದ್ಯೆ ಹೆಬ್ಬಾಳಿನಲ್ಲಿ ತಹಸೀಲ್ದಾರ್ ಅವರಿಗೆ ಮನವಿ ನೀಡಿ ಮೂರು ತಿಂಗಳ ಗಡುವು ನೀಡಲಾಗಿದೆ. ಬಳಿಕವೂ ನಿರ್ಲಕ್ಷ್ಯ ತೋರಿದರೆ ಖಂಡಿತ ಹೋರಾಟ ಉಗ್ರಸ್ವರೂಪ ಪಡೆಯುತ್ತದೆ. ಐದಳ್ಳ ಕಾವಲಿನ ಭೂಮಿಯಲ್ಲಿ ಪ್ರೋ.ನಂಜುಂಡಸ್ವಾಮಿ ಪುತ್ಥಳಿ ಸ್ಥಾಪನೆಯೊಂದಿಗೆ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದರು.
  ಈ ಸಂದರ್ಭದಲ್ಲಿ ರೈತ ಮುಖಂಡರಾದ ನಿಂಗಪ್ಪ, ಅಯ್ಯಬಾ ಸಾಬ್, ಏಜಾಜ್ ಪಾಷ, ಮಹಮ್ಮದ್ ದಸ್ತಗಿರಿ, ಭೋಜರಾಜ್, ಹನುಮಂತ ಇನ್ನೂ ಮುಂತಾದವರು ಭಾಗವಹಿಸಿದ್ದರು.